September 11, 2025
IMG-20250605-WA0048

*ಅರಸೀಕೆರೆ ಹೊಯ್ಸಳ ವಿಜಯ*

ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅಮೃತ ಮಿತ್ರ 2.0 ಯೋಜನೆಯಡಿ ಜಾರಿಗೆ ತಂದಿರುವ ಅರಸೀಕೆರೆ ನಗರಸಭಾ ವ್ಯಾಪ್ತಿಯಲ್ಲಿನ ಮಹಿಳೆಯರಿಗಾಗಿ ಮರಗಳು ಎಂಬ ವಿಶೇಷ ಕಾರ್ಯಕ್ರಮ ವನ್ನು ಇಂದು ವಿಶ್ವ ಪರಿಸರ ದಿನ ದಿನಾಚರಣೆಯ ಪ್ರಯುಕ್ತ ಇಂದು ಅರಸೀಕೆರೆಯ ಜೇನುಕಲ್ ನಗರದ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ನಗರಸಭೆ ಅಧ್ಯಕ್ಷರಾದ *ಎಮ್ ಶಮಿವುಲ್ಲಾ.* ಸಸಿಗಳನ್ನು ನೆಟ್ಟರು

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ *ಎಂ ಶಮಿವುಲ್ಲಾ* ರವರು ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು ನಗರ ಸಭೆಯ ಸಹಯೋಗದೊಂದಿಗೆ ಕೈಜೋಡಿಸಿ ಉತ್ತಮ ರೀತಿಯಲ್ಲಿ ಸಸಿಗಳನ್ನು ಪೋಷಣೆ ಮಾಡಿ ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಬೇಕೆಂದರು ಈ ಸಮಾರಂಭದಲ್ಲಿ ಪೌರಾಯುಕ್ತರಾದ ಎಚ್ ಟಿ ಕೃಷ್ಣಮೂರ್ತಿ . ಸಹಾಯಕ ಕಾರ್ಯ ಪಾಲಕ ಅಭಿಯಂತರ. ಪರಿಸರ ಮತ್ತು ಕಂದಾಯ ಸಹಾಯಕ ಅಭಿಯಂತರರು . ಹಾಗೂ ಸಮುದಾಯ ಸಂಘಟನಾಧಿಕಾರಿಗಳಾದ ರಾಜಶೇಖರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು